ಖತಾರಿನ ಮಂಗಳೂರು ಕ್ರಿಕೆಟ್ ಕ್ಲಬ್ ಇದರ 27 ನೇ ವಾರ್ಷಿಕೋತ್ಸವದಲ್ಲಿ ಪ್ರದರ್ಶನ ನೀಡಲು, ಕೊಂಕಣಿಯ ವೃತ್ತಿಪರ ನಾಟಕ ರೆಪರ್ಟರಿ ಕಲಾಕುಲ್ ತಂಡವು ತೆರಳಿದೆ. ಅರುಣ್‌ರಾಜ್ ರೊಡ್ರಿಗಸ್ ಬರೆದು ನಿರ್ದೇಶಿಸಿದ ಬುಡ್ತುಗೊಲ್ ಹಾಗೂ ಪೇಯಿಂಗ್ ಗೆಸ್ಟ್ ನಾಟಕಗಳನ್ನು 26-04-2019 ರಂದು ಅಲ್ ವಕ್ರಾಹದಲ್ಲಿರುವ ಡಿಪಿಎಸ್ ಮೊಡರ್ನ್ ಸ್ಕೂಲ್ ಸಭಾಂಗಣದಲ್ಲಿ ಪ್ರದರ್ಶಿಸಲಾಗುವುದು.

ಈ ತಂಡದಲ್ಲಿ ಸಂಗೀತಗಾರ ಗುರುಮೂರ್ತಿ ವಿ.ಎಸ್. ಹಾಗೂ ಕಲಾವಿದರುಗಳಾದ ವಿಕಾಸ್ ಲಸ್ರಾದೊ, ಸವಿತಾ ಸಲ್ಡಾನ್ಹಾ, ಸುಶ್ಮಿತಾ ತಾವ್ರೊ, ಆಮ್ರಿನ್ ಕ್ರಿಸ್ಟನ್ ಡಿಸೋಜ, ಫ್ಲಾವಿಯಾ ಮಸ್ಕರೇನ್ಹಸ್, ಮನೀಶ್ ಪಿಂಟೊ, ಫ್ಲಾವಿಯಾ ರೊಡ್ರಿಗಸ್ ಮತ್ತು ಸುನೀಲ್ ಸಿದ್ಧಿ ತೆರಳಿದ್ದಾರೆ.

ಮಾಂಡ್ ಸೊಭಾಣ್ 2011 ರಲ್ಲಿ ಕಲಾಕುಲ್ ರೆಪರ್ಟರಿಯನ್ನು ಆರಂಭಿಸಿತ್ತು. ಕಳೆದ ಎಂಟು ವರ್ಷದಲ್ಲಿ ನಾಲ್ಕು ವಿದೇಶ ಪ್ರವಾಸ ಯೋಗ ತಂಡದ ವಿವಿಧ ಸದಸ್ಯರಿಗೆ ಲಭಿಸಿದೆ.

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626